ಕಲ್ಯಾಣದ ದಾರಿತುಂಬ

ಪ್ರತಿ ಹಕ್ಕಿಯ ಕೊರಳ ತುಂಬಾ
ಧ್ವನಿಸುವ ಹಾಡು ನನ್ನ ನಿನ್ನ ಪ್ರೇಮ
ನಲಿಯುವ ಉಲಿಯುವ ಹಾಡಾಗಿ
ಸೂರ್ಯ ಕಿರಣ ಚೆಲ್ಲಿದ್ದಾನೆ ಶುಭ ಮುಂಜಾವಿನಲಿ.

ಅರಿಕೆಗೊಂಡ ಪ್ರೀತಿ ಪ್ರತಿ ಹನಿಹನಿ
ಚಿಮ್ಮಿ ಲಹರಿಯ ತೇಲಿ ಸಾಗಿವೆ ಸಾಕ್ಷಿ
ಬೀಜಗಳು ಚಿಗುರುವ ಮೊಳಕೆಯಾಗಿ
ಮರು ಹುಟ್ಟಿನ ಹಸಿರು ರೂಪಕಗಳಲಿ.

ಬಯಲ ಭಾಷೆಯಲಿ ಮೌನ ಮಾತು
ತೆರೆಯದಿದ್ದರು ಅರ್ಥ ಹೊಮ್ಮುವ ನಾದ
ಪ್ರತಿಮೆಗಳು ಹಣತೆಯಲ್ಲಿ ದೀಪಗಳು
ಸಂಜೆ ದೇವರು ಮನೆಯ ಬಿಂಬದಲ್ಲಿ
ಸಾವಿರಾರು ಚಿಕ್ಕೆಗಳ ಫಳಫಳ.

ನೀಲ ರಾಶಿ ನೀರ ರಾಶಿ ಒಲವರಾಶಿ
ಬೀಜ ರಾಶಿಗಳಲಿ ಎದೆಯ ಹದ
ಮುದವಾಗಿ ತೀಡಿತೀಡಿ ಎದ್ದ ಕವಿತೆಗಳು
ದಾರಿಯಲಿ ಸವೆದ ಚಂದ್ರನ ತುಂಬಾ ಬೆಳದಿಂಗಳು.

ಹಕ್ಕಿಯೊಂದು ಹಾರಿಬಂದು ಭಾವ
ಚಂದ್ರನಲಿ ಬೆಳದಿಂಗಳು ತುಂಬಿ
ಅವನ ಬೆಳಕಿಂಡಿ ಇವಳ ಕನಸುಗಳಲಿ
ಬಿಂದು ಬಿಂದು-ವಿನಿಂದು ಚಲಿಸಿದ
ಅಲ್ಲಮನ ರಂಗೋಲಿ ಕಲ್ಯಾಣದ ದಾರಿತುಂಬ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ೫೦ ಸಾವಿರ ವರ್ಷದ ನಂತರ ಭೂಮಿಗಿಳಿಯುವಂತೆ ಮಾಡಿದ ಕೃತಕ ಉಪಗ್ರಹ : ಕಾಲಕೋಶ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೬೮

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

cheap jordans|wholesale air max|wholesale jordans|wholesale jewelry|wholesale jerseys